ಮುನ್ನುಡಿ
ಪ್ರವಾದಿ ಯೊವೇಲನ ಕಾಲ ಮತ್ತು ಜೀವನವನ್ನು ಕುರಿತು ನಮಗೆ ಸಾಕಷ್ಟು ಮಾಹಿತಿ ದೊರಕಿಲ್ಲ. ಕ್ರಿ. ಪೂ. ನಾಲ್ಕು ಅಥವಾ ಐದನೇ ಶತಮಾನದಲ್ಲಿ ಪರ್ಷಿಯನ್ನರು ಜುದೇಯ ನಾಡನ್ನು ಆಳುತ್ತಿದ್ದಾಗ ಈ ಗ್ರಂಥ ಉಗಮವಾಗಿರಬಹುದೆಂಬುದು ಕೆಲವರ ಅಭಿಪ್ರಾಯ. ಪಾಲೆಸ್ಟಿನ್ ನಾಡಿನಲ್ಲಿ ಮಿಡತೆಗಳ ಭೀಕರ ಹಾವಳಿ ಹಾಗೂ ಘೋರಕ್ಷಾಮ ತಲೆದೋರಲಿವೆಯೆಂದು ಯೊವೇಲನು ಮುಂತಿಳಿಸುತ್ತಾನೆ. ಈ ಅನಾಹುತ ಸರ್ವೇಶ್ವರನ ಮಹಾದಿನದ ಮುನ್ಸೂಚನೆ ಮತ್ತು ಅನೀತಿವಂತರಿಗೆ ಬರಲಿರುವ ದಂಡನೆಯ ಕುರುಹು ಎಂದು ಅರುಹಿಸುತ್ತಾನೆ.
ಜನರು ತಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು, ದೇವರಾದ ಸರ್ವೇಶ್ವರಸ್ವಾಮಿಗೆ ಶರಣರಾಗಬೇಕು. ಸೂಕ್ತಕಾಲದಲ್ಲಿ ದೇವರು ಎಲ್ಲಾ ಮಾನವರ ಮೇಲೆ ತಮ್ಮ ಪವಿತ್ರಾತ್ಮರನ್ನು ಸುರಿಸಿ ಆಶೀರ್ವಾದ ಮಾಡುವರು ಎಂಬುದು ಈ ಗ್ರಂಥದ ಮುಖ್ಯಾಂಶ.
ಪರಿವಿಡಿ
1. ಮಿಡತೆಗಳ ಹಾವಳಿ 1:1—2:17
2. ಜೀವೋದ್ಧಾರದ ವಾಗ್ದಾನ 2:18—2:27
3. ಸರ್ವೇಶ್ವರನ ದಿನ 2:28—3:21