ಮುನ್ನುಡಿ
ನೆಹೆಮೀಯನ ಈ ಗ್ರಂಥವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಬಹುದು:
1: ಬಾಬಿಲೋನಿನಿಂದ ಹಾಗೂ ಪರ್ಷಿಯಾದ ರಾಜ ಸೈರಸಿನ ಅಪ್ಪಣೆ ಮೇರೆಗೆ, ಜೆರುಸಲೇಮಿಗೆ ಹಿಂತಿರುಗಿದ ನೆಹೆಮೀಯನು ಜುದೇಯದ ರಾಜ್ಯಪಾಲನಾಗುತ್ತಾನೆ;
2: ಜೆರುಸಲೇಮಿನ ಕೋಟೆಗೋಡೆಗಳನ್ನು ಪುನಃ ಕಟ್ಟಿಸಲು ನಡುಕಟ್ಟಿ ನಿಲ್ಲುತ್ತಾನೆ;
3: ಯಾಜಕ ಎಜ್ರನಿಂದ ಧರ್ಮಶಾಸ್ತ್ರದ ಪಠನ ಮತ್ತು ಸಭಿಕರಿಂದ ಪಾಪನಿವೇದನೆ ನಡೆಯುತ್ತದೆ;
4: ಜುದೇಯ ಪ್ರಾಂತ್ಯದಲ್ಲಿ ತಾನು ರಾಜ್ಯಪಾಲನಾಗಿ ಸಾಧಿಸಿದ ಮತ್ತಿತರ ಧಾರ್ಮಿಕ ಸುಧಾರಣೆಗಳನ್ನು ನೆಹೆಮೀಯನೇ ವಿವರಿಸುತ್ತಾನೆ.
ಪರಿವಿಡಿ
1: ಜೆರುಸಲೇಮಿಗೆ ಹಿಂದಿರುಗಿಬಂದ ನೆಹೆಮೀಯ 1:1—2:20
2: ಕೋಟೆಗೋಡೆಯ ದುರಸ್ತಿ 3:1—7:73
3: ಧರ್ಮಶಾಸ್ತ್ರದ ಪಠನ ಹಾಗು ಒಡಂಬಡಿಕೆಯ ಬಗ್ಗೆ ಪ್ರಮಾಣವಚನ 8:1—10:39
4: ನೆಹೆಮೀಯನ ಇತರ ಧಾರ್ಮಿಕ ಸುಧಾರಣೆಗಳು 11:1—13:31